ಫೆಬ್ರವರಿಯಲ್ಲಿ ಜೋರ್ಡಾನ್‌ಗೆ ಪೃಥ್ವಿ
Posted date: 21/January/2010
ರಾಂಬಾಬು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ, ಸೂರಪ್ಪ ಬಾಬು, ಎನ್.ಎಸ್. ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಪೃಥ್ವಿ ಚಿತ್ರದ ಚಿತ್ರೀಕರಣವು ಈಗ ಸೇಲಂನಲ್ಲಿ ಮುಗಿದು ನಗರದಲ್ಲಿ ಮುಂದುವರೆದಿದೆ. ಚಿತ್ರಕ್ಕಾಗಿ ಹತ್ತುದಿವಸಗಳ ಕಾಲ ನಡೆದ ಚಿತ್ರೀಕರಣದಲ್ಲಿ ಪುನೀತ್‌ರಾಜ್‌ಕುಮರ್, ಪಾರ್ವತಿ, ಜಾನ್, ವಿಜಯ್, ಜಾನ್ ಅನೀಸ್ ಕುಕ್ಕಿನ್ ಮುಂತಾದವರು ಭಾಗವಹಿಸಿದ ಅದ್ದೂರಿ ಕ್ಲೈಮ್ಯಾಕ್ಸ್‌ಅನ್ನು  ನಾಲ್ಕು ಸೂಪರ್ ೩೫ ಕ್ಯಾಮೆರಾ, ಜಿಮ್ಮಿಜಿಪ್, ಸ್ಟಡಿಕಾಂ ಬಳಸಿ ಸೆಲುಂ ರಸ್ತೆ ಗಳಲ್ಲಿ ರಾಜಶೇಖರ್ ಸಾಹಸ ನಿರ್ದೇಶನದೊಂದಿಗೆ ಸತ್ಯ ಛಾಯಾಗ್ರಹಣದಲ್ಲಿ ನಿರ್ದೇಶಕ ಜೀಕಬ್ ವರ್ಗಿಸ್ ಚಿತ್ರಿಸಿಕೊಂಡರು. ನಗರದಲ್ಲಿ ಹತ್ತು ದಿವಸಗಳ ಚಿತ್ರೀಕರಣ ಮುಗಿಸಿ ಚಿತ್ರತಂಡವು ಚಿತ್ರೀಕರಣಕ್ಕಾಗಿ ಜೋರ್ಡಾನ್‌ಗೆ ಪ್ರಯಾಣ ಬೆಳಸಲಿದೆ ಎಂದು ನಿರ್ಮಾಪಕ ರಾಜ್‌ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಮಣಿಕಾಂತ್‌ಕದ್ರಿ ಸಂಗೀತ, ಕವಿರಾಜ್, ಕಲ್ಯಾಣ್ ಸಾಹಿತ್ಯ, ರಾಜ್ ಶೇಖರ್ (ನಾಡೋಡಿಗಳ್, ಪೊರತ್ತಿವೀರನ್) ಸಾಹಸವಿದ್ದು, ಚಿತ್ರವನ್ನು ಯುವನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿದ್ದಾರೆ.  ತಾರಾಗಣದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್, ಪಾರ್ವತಿ, ಶ್ರೀನಿವಾಸ ಮೂರ್ತಿ, ಸತ್ಯಪ್ರಿಯ, ರಮೇಶ್‌ಭಟ್, ಪದ್ಮಜಾ ರಾವ್, ಅವಿನಾಶ್, ಶಿವಾಜಿರಾವ್ ಜಾಧವ್, ಜಾನ್ ವಿಜಯ್, ಜಾನ್ ಅನೀಸ್, ಕುಕ್ಕಿನ್ (ಬಾಲಿವುಡ್ ಖ್ಯಾತಿ) ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed